Home » News » ಅಧಿಕಾರಿಗಳ ಲಂಚವತಾರಕ್ಕೆ ಬೇಸತ್ತು… ಅರ್ಜಿಯ ಜೊತೆಗೇನೆ ಹಣ (ಲಂಚ)ತಂದ ವ್ಯಕ್ತಿ! ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿಗಳೆದುರು ಬಹಿರಂಗವಾದ ಭ್ರಷ್ಟಾಚಾರದ ಕಹಿ ವಾಸ್ತವ..

ಅಧಿಕಾರಿಗಳ ಲಂಚವತಾರಕ್ಕೆ ಬೇಸತ್ತು… ಅರ್ಜಿಯ ಜೊತೆಗೇನೆ ಹಣ (ಲಂಚ)ತಂದ ವ್ಯಕ್ತಿ! ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿಗಳೆದುರು ಬಹಿರಂಗವಾದ ಭ್ರಷ್ಟಾಚಾರದ ಕಹಿ ವಾಸ್ತವ..

by CityXPress
0 comments

ತುಮಕೂರು:
ಸರ್ಕಾರದ ಜನಸಂಪರ್ಕ ಸಭೆಗಳು ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ವೇದಿಕೆಯಾಗಬೇಕಾದರೆ, ಕೆಲವು ಕಡೆ ಅವು ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಹೊರಹಾಕುವ ವೇದಿಕೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಜಿಲ್ಲಾಡಳಿತದ ಜನಸಂಪರ್ಕ ಸಭೆಯಲ್ಲಿ ನಡೆದ ಘಟನೆ ಇದಕ್ಕೆ ಜೀವಂತ ಉದಾಹರಣೆಯಾಗಿದೆ.

ತಾಲೂಕಿನ ಸಂಪಿಗೆ ಗ್ರಾಮದ ನಾಗೇಶ್ ಎಂಬ ರೈತ, ತನ್ನ ಅರ್ಜಿಯ ಜೊತೆಗೆ ಅಧಿಕಾರಿಗಳಿಗೆ ಲಂಚ ಕೊಡಲು ಹಣವನ್ನೇ ಸಭೆಗೆ ತಂದ ಘಟನೆ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿತು. ಸಭೆಯ ಮಧ್ಯೆ ಅರ್ಜಿಯನ್ನು ಸಲ್ಲಿಸುವ ವೇಳೆ ನಾಗೇಶ್ ಅವರು ಹಣವನ್ನು ಕೂಡ ಅಧಿಕಾರಿಗಳ ಮುಂದೆ ಇಟ್ಟಾಗ, ಕೆಲಕಾಲ ಸಭೆಯಲ್ಲಿ ಗಾಬರಿ ವಾತಾವರಣ ನಿರ್ಮಾಣವಾಯಿತು.

“ಲಂಚ ಕೊಡದೆ ಕೆಲಸ ಆಗಲ್ಲ” – ನಾಗೇಶ್ ಆಕ್ರೋಶ

ನಾಗೇಶ್ ಕಳೆದ ಎರಡು ವರ್ಷಗಳಿಂದ ಖಾತೆ (ಮ್ಯೂಟೇಷನ್) ಬದಲಾವಣೆಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾನೆ. ಈ ಅವಧಿಯಲ್ಲಿ ತಿಪಟೂರು ಸಹಾಯಕ ಆಯುಕ್ತರ ಕಚೇರಿಗೆ ಸಂಬಂಧಿಸಿದ ಕೇಸ್ ವರ್ಕರ್ ₹20,000 ಲಂಚದ ಬೇಡಿಕೆ ಇಟ್ಟಿದ್ದಾನೆ ಎಂದು ನಾಗೇಶ್ ಆರೋಪಿಸಿದ್ದಾರೆ. ಈ ಹಿಂದೆ ತುಮಕೂರು ಜಿಲ್ಲೆ ಜಿಲ್ಲಾಧಿಕಾರಿ (DC) ಮತ್ತು ಸಹಾಯಕ ಆಯುಕ್ತ (AC) ಅವರಿಗೆ ಮೂರು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ, ಬೇಸತ್ತ ನಾಗೇಶ್ ಈ ಬಾರಿ ಜನಸಂಪರ್ಕ ಸಭೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

banner

ಸಭೆಯಲ್ಲಿ ಅವರು ₹15,000 ಹಣವನ್ನು ಅರ್ಜಿಯ ಜೊತೆಗೆ ನೀಡಲು ಮುಂದಾಗಿ, “ಇದನ್ನು ತೆಗೆದುಕೊಂಡು ನನ್ನ ಕೆಲಸ ಮಾಡಿಬಿಡಿ” ಎಂದು ವ್ಯಂಗ್ಯವಾಗಿ ಹೇಳಿ ಅಧಿಕಾರಿಗಳ ಲಂಚವತಾರವನ್ನು ಬಹಿರಂಗಪಡಿಸಿದರು. ಅವರ ಈ ನಡೆ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.

ಜನಸಂಪರ್ಕವೇ ಅಥವಾ ಜನವಂಚನೆ?

ಜನಸಂಪರ್ಕ ಸಭೆಗಳ ಉದ್ದೇಶವೇ ಜನರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ. ಆದರೆ ನಾಗೇಶ್ ಅವರ ಪ್ರಕರಣದಿಂದ “ಲಂಚ ಕೊಟ್ಟಾಗ ಮಾತ್ರ ಕೆಲಸ ನಡೆಯುತ್ತದೆಯೇ?” ಎಂಬ ಪ್ರಶ್ನೆ ಮತ್ತೆ ತಲೆದೋರಿದೆ. ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತ್ವದ ಕೊರತೆ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಸಚಿವರ ಗಮನಕ್ಕೆ ಒತ್ತಾಯ

ಈ ಘಟನೆಯ ಬಳಿಕ ನಾಗೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರ ಗಮನಕ್ಕೆ ಈ ವಿಷಯವನ್ನು ತರಬೇಕೆಂದು ಆಗ್ರಹಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರೈತರ ಸಮಸ್ಯೆಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಜನರ ಅಸಹನೆ ಹೆಚ್ಚುತ್ತಿದೆ

ಇಂತಹ ಘಟನೆಗಳು ಸರ್ಕಾರದ ವ್ಯವಸ್ಥೆಯ ಮೇಲಿನ ಜನರ ನಂಬಿಕೆಗೆ ದೊಡ್ಡ ಹೊಡೆತ ನೀಡುತ್ತಿವೆ. ಒಂದೆಡೆ ಡಿಜಿಟಲ್ ಭಾರತ, ಪಾರದರ್ಶಕ ಆಡಳಿತ ಎಂಬ ಘೋಷಣೆಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ನೆಲಮಟ್ಟದಲ್ಲಿ ಲಂಚದ ಬೇಡಿಕೆ ಮುಂದುವರಿಯುತ್ತಿರುವುದು ಆಡಳಿತದ ವೈಫಲ್ಯವನ್ನು ತೋರಿಸುತ್ತದೆ.

ಒಟ್ಟಿನಲ್ಲಿ, ತುರುವೇಕೆರೆಯ ಈ ಘಟನೆ ಕೇವಲ ಒಬ್ಬ ರೈತನ ನೋವಷ್ಟೇ ಅಲ್ಲ, ವ್ಯವಸ್ಥೆಯಲ್ಲಿರುವ ದೋಷಗಳ ಮೇಲೆ ಬೆಳಕು ಚೆಲ್ಲಿದ ಕಹಿ ಸತ್ಯವಾಗಿದೆ. ಇದು ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾದರೆ ಮಾತ್ರ ಜನಸಂಪರ್ಕ ಸಭೆಗಳ ನಿಜವಾದ ಅರ್ಥ ಉಳಿಯಲಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb